PROBHO DAYALA. CAME ALL THE WAY FROM SITAPUR TO BANGALORE.BLESSING US IS YOUR GREATNESS

Friday, January 6, 2012

BEML rolls out India's first standard gauge metro car

BEML rolls out India's first standard gauge metro car

Sunday, January 1, 2012

what if) Kannada News. CM,s smile(thanks DVS website)

ನಿಮ್ಮೆಲ್ಲರ ಸದಾಶಯಕ್ಕೆ ನನ್ನ ನಮನ

Friday, August 12th, 2011

ಎಷ್ಟೊಂದು ಸದಾಶಯಗಳು… ಎಷ್ಟೊಂದುಪ್ರೀತಿ… ಎಷ್ಟು ಅಭಿಮಾನ, ಏನೆಲ್ಲ ನಿರೀಕ್ಷೆಗಳು… ನನ್ನ ಜಾಲತಾಣಕ್ಕೆ ಬಂದ ನೂರಾರು ಅಭಿಮಾನದ ಮಿಂಚಂಚೆಗಳಿಗೆ ಏನೆಂದು ಪ್ರತಿಕ್ರಿಯಿಸಲಿ…
ಈ ಪತ್ರಗಳನ್ನೆಲ್ಲ ನೋಡಿ ಅಚ್ಚರಿಗೊಂಡೆ. ನನ್ನನ್ನು ಖುದ್ದು ನೋಡಲಾಗದವರು, ದೂರದ ಊರಿನವರು, ನನ್ನ ಸಹಪಾಠಿಗಳು, ಪಕ್ಷವನ್ನು ಬೆಂಬಲಿಸುತ್ತ ಬಂದ ಹಿರಿಯ ಕಾರ್ಯಕರ್ತರು, ಮಾಜಿ ಸೇನಾಧಿಕಾರಿಗಳು, ಯುವಕರು ಎಲ್ಲರೂ ಬರೆದ ಈ ಪತ್ರಗಳನ್ನು ಸರಸರನೆ ನೋಡಿ ಈ ಬ್ಲಾಗ್ ಬರೆಯುತ್ತಿದ್ದೇನೆ.
ನಾನೇನು ಜಾಲ ತಾಣದಲ್ಲಿ ನಾನೇ ಬರೆಯುವಷ್ಟು ಪಳಗಿದವನಲ್ಲ. ಆದರೆ ಎದೆಯೊಳಗೆ ಮಿಂಚಿದ ಭಾವಗಳನ್ನು ಹೇಳಿ ಬರೆಸಬಲ್ಲೆ. ವಿದ್ಯಾರ್ಥಿ ಆಂದೋಲನದ ಮೂಲಕ, ಸಕ್ರಿಯ ರಾಜಕಾರಣದ ಮೂಲಕ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡ ನಾನು ನಿಮ್ಮೆಲ್ಲರ ಎದುರು ಒಂದಷ್ಟು ಮಾತನಾಡಬಲ್ಲೆ. ಮುಖ್ಯಮಂತ್ರಿಯಾದ ಮೊದಲ ದಿನಗಳ ಗಡಿಬಿಡಿಯಲ್ಲಿ ಕೊನೇಪಕ್ಷ ಇದೊಂದು ಕೃತಜ್ಞತೆಯ ಬ್ಲಾಗನ್ನಾದರೂ ನಿಮಗೆ ತಲುಪಿಸಬಲ್ಲೆ! ನನ್ನ ನಗುಮೊಗವನ್ನು ಹೊಗಳಿ ಬರೆದ ಹೊನ್ನ ಗೌಡರು ಕೃಷಿರಂಗದ ಅಭಿವೃದ್ಧಿಗೆ ತೋಟಗಾರಿಕೆಯ ಸಲಹೆ ನೀಡಿದ್ದಾರೆ. ಗುಜರಾತಿನ ಅಭ್ಯುದಯದ ಮಾದರಿಬೇಕು ಎಂದಿದ್ದಾರೆ ಸುಜಯ್ಮತ್ತು ಮಹಾಂತೇಶ್. ಮಾತಿಗಿಂತ ಕೃತಿಲೇಸು; ಅಲ್ಪ ಮತ್ತು ದೀರ್ಘಾವಧಿ ಯೋಜನೆ ಹಮ್ಮಿಕೊಳ್ಳಿ ಎಂದು ಶಿವರಾಮ ಶೆಟ್ಟಿ ಬರೆದಿದ್ದಾರೆ. ‘ಕಷ್ಟವನ್ನು ಅವಕಾಶವಾಗಿ ಪರಿವರ್ತಿಸಿ’ ಎಂದು ಕಿವಿಮಾತು ಹೇಳಿದ್ದಾರೆ. ಆಹಾರ ಸರಬರಾಜು ಸುಗಮವಾಗಲಿ, ಸಾರ್ವಜನಿಕ ಸಾರಿಗೆ ಇನ್ನಷ್ಟು ಸುಧಾರಿಸಲಿ ಎಂದು ಪಿಎನ್ ರಾಜಗೋಪಾಲ್ ಹೇಳಿದ್ದಾರೆ. ಹಲವು ರಂಗಗಳಲ್ಲಿ ಗುಜರಾತ್ ರಾಜ್ಯದ ಸಾಧನೆಗಳನ್ನು ಪಟ್ಟಿಮಾಡಿದ್ದಾರೆ. ನಮ್ಮ ಮಾನ್ಯ ನರೇಂದ್ರ ಮೋದಿಯವರ ಮೋಡಿ ಎಷ್ಟಿದೆ ನೋಡಿ…!
ಹಲವು ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ತುಂಬಿ ಎಂದು ನಿರುದ್ಯೋಗಿ ಯುವಕ ಲಕ್ಷ್ಮಣ ಕುಣಿಗೇರಿ ವಿನಂತಿಸಿಕೊಂಡಿದ್ದಾರೆ. ಮಹಾನಗರಗಳ ಅಪರಾಧ ಘಟನೆಗಳನ್ನು ತಗ್ಗಿಸಿ ಎಂದು ವಿಕ್ರಮ್ ಕಿಣಿ ಕೇಳಿಕೊಂಡರೆ, ನಮ್ಮ ರಾಜ್ಯದಿಂದ ಕೆಲಸಗಾರರು ವಲಸೆ ಹೋಗದಂತೆ ನೋಡಿಕೊಳ್ಳಿ ಎಂದು ಮುಕ್ಕಣ್ಣ ಸೂಗಾ ಬರೆದಿದ್ದಾರೆ.
ನಿಮಗಿರುವುದು ಕೇವಲ ೨೪ ತಿಂಗಳು, ಪ್ರವಾಸಮಾಡಬೇಕಾದ್ದು ೧೭೫ ತಾಲೂಕುಗಳು ಎಂದು ಮಲ್ಲಿಕಾರ್ಜುನ ಖಾನಾಪುರ ಉಲ್ಲೇಖಿಸಿದ್ದಾರೆ. ವಿಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎನ್ನುವುದು ಅವರ ಮನವಿ. ಸಂಜೀವ ಪೂಜಾರಿಯವರು ದೇವರು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾರೆ. ಬೆಳಗಾವಿಗೆ ಬನ್ನಿ ಎಂದು ಸತೀಶ್ ಪಾಟೀಲ್ ಆಹ್ವಾನಿಸಿದ್ದಾರೆ.
ಹಾಗೇ ನೋಡುತ್ತಾ ಹೋದರೆ, ಪಂಜಿಕಲ್ಲಿನಲ್ಲಿ ಅರವತ್ತರ ದಶಕದಲ್ಲಿ ನನ್ನೊಡನೆ ಆರು – ಏಳನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಕುಂಬ್ಳೆಯ ಕೆ. ಶಾಂತಾರಾಮ ಕೂಡಾ ನನಗೆ ಶುಭಾಶಯದ ಈಮೈಲ್ ಕಳಿಸಿದ್ದಾನೆ! ಒಮ್ಮೆ ಈ  ಸಹಪಾಠಿಯನ್ನು ನೋಡುವ ಬಯಕೆ ಮೂಡಿದೆ. ರೈತರಿಗೆ ಆದ್ಯತೆ ಕೊಡಿ ಎಂದು ರಾಹುಲ್ ಬರೆದಿದ್ದಾರೆ. ಖಂಡಿತವಾಗಿಯೂ; ರೈತರಿಗಾಗಿಯೇ ಕೃಷಿ ಬಜೆಟ್ ಮಂಡಿಸಿದ ಪ್ರಪ್ರಥಮ ರಾಜ್ಯ ನಮ್ಮದು ರಾಹುಲ್!
ಹೀಗೆ ಬಂದ ಎಲ್ಲ ಪತ್ರಗಳನ್ನೂ ಓದಿಲ್ಲ. ಓದಿದ್ದನ್ನೆಲ್ಲ ಉಲ್ಲೇಖಿಸಿಲ್ಲ. ಹಿತವಚನ, ಕಿವಿಮಾತು, ಎಚ್ಚರಿಕೆ, ಕಾಳಜಿ – ಎಲ್ಲವೂ ಈ ಪತ್ರಗಳಲ್ಲಿ ಪ್ರತಿಧ್ವನಿಸಿವೆ. ನನ್ನ ಪ್ರಿಯ ಓದುಗರೆ, ನಿಮ್ಮೆಲ್ಲರ ಅಭಿಮಾನಕ್ಕೆ ವಂದನೆಗಳು. ನಿಮ್ಮೆಲ್ಲರ ಸಲಹೆಗಳನ್ನೂ ಖಂಡಿತ ಸಮಯಾನುಸಾರ, ಸಂದರ್ಭಾನುಸಾರ ಗಮನಿಸುತ್ತೇನೆ.
ಅದೇನೇ ಇರಲಿ, ಈ ಮಾಧ್ಯಮದಲ್ಲಿ ನಿಮ್ಮ ಪ್ರತಿಕ್ರಿಯೆ ಸದಾ ಬರುತ್ತಿರಲಿ. ಕಟುಟೀಕೆಯನ್ನೂ, ಮೆದುಮಾತುಗಳನ್ನೂ ಸಮಚಿತ್ತದಿಂದ ಕೇಳಿ ಸಮುದಾಯದ ಹಿತಕ್ಕಾಗಿ ಶ್ರಮಿಸುವೆ ಎಂದಷ್ಟೆ ಈಗ ಹೇಳಬಯಸುತ್ತೇನೆ. ಮೂರು ವರ್ಷಗಳ ಕಾಲಾವಧಿಯಲ್ಲಿ ನಮ್ಮ ಬಿಜೆಪಿ ಸರ್ಕಾರ ಏನೇನೆಲ್ಲ ಜನಪರ ಕಾರ್ಯಕ್ರಮಗಳನ್ನು ಮಾಡಿದೆಎಂಬುದನ್ನು ಈ ಲಿಂಕ್ ಮೂಲಕ ನೀವು ಓದಿ ತಿಳಿಯಬಹುದು. ನಿರ್ಧರಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಮಾಡುವುದಕ್ಕೆ ನನ್ನ ಆದ್ಯತೆ.
ನಿಮ್ಮ ಪ್ರೀತಿಯ
ಸದಾನಂದ ಗೌಡ  


Website last updated on

RARE NOT AS NOTE FOR NEW YEAR 12

ON A/C OF NEW YEAR THE ABOVE PHOTO OF RARE RS 500/ ( SEE CAREFULLY
EACH AND EVERY ASPECT OF NOTE, AND FIND OUT THE UNIQUE SPECIALITY
THE LORD VENKATESWARA WILL BLESS U ON 2012 WITH MORE 500 RS NOTES( EVEN
WITH RARE NOTES)
PHOTO WITH SPECIAL EFFECT/CONCEPT AUTHOR
CAMERA; NIDHI.
( SHALL WE FIND UR ANSWAER IN COMMENTS SECTION)